Saturday, April 5, 2014

ಸ್ವತಂತ್ರದ ಹೆಜ್ಜೆಗಳು 3 - ಭಾರತದ ಮಹಾಚುನಾವಣ ಸಂಗ್ರಾಮಗಳು (1962)

ಸ್ವತಂತ್ರದ ಹೆಜ್ಜೆಗಳು 3 - ಭಾರತದ ಮಹಾಚುನಾವಣ ಸಂಗ್ರಾಮಗಳು  (1962)



1957  ರಲ್ಲಿ ನೆಹರೂರವರು ಕಾಂಗ್ರೆಸ್‌ನ್ನು ಒಂದು ಸುಸ್ಪಷ್ಟವಾದ ವಿಜಯದೆಡೆಗೆ ಒಯ್ದಿದ್ದರು. ನೆಹರು ತಮ್ಮ ಅಧಿಕಾರಾವಧಿಯ ಸಮಯದಲ್ಲಿ, ‘ ಅಭಿವೃದ್ಧಿ ಮತ್ತು ಬೆಳವಣಿಗೆಯ’  ಕ್ಷೇತ್ರಗಳಲ್ಲಿ ದೇಶಕ್ಕೆ ಸಂಬಂಧಿಸಿದ ಒಂದು ಹೊಸ ನೋಟವನ್ನೂ ಸಹ ಕಲ್ಪಿಸಿಕೊಂಡಿದ್ದರು. ಪಂಚವಾರ್ಷಿಕ ಯೋಜನೆಯ ಕಾರ್ಯಕ್ರಮವು ಈ ರೀತಿಯಲ್ಲಿ ಜಾರಿಗೆ ಬಂದಿತು.  


1951 ರಲ್ಲಿ ತಮ್ಮ ಕನಸಿನ  ‘ಪಂಚವಾರ್ಷಿಕಯೋಜನೆ ‘ ಪ್ರಾರಂಭಿಸಿ ಮೊದಲಿಗೆ ಕೃಷಿಗೆ ಪ್ರಾದಾನ್ಯತೆ ಕೊಟ್ಟಿದ್ದರು. ಪ್ರಧಾನಿಯವರನ್ನು ಅಧ್ಯಕ್ಷರನ್ನಾಗಿ ಉಳ್ಳ ‘ಪ್ಲಾನಿಂಗ್ ಕಮೀಷನ್ ‘ ಬಾಕ್ರನಂಗಲ್ , ಹಿರಾಕುಡ್ ನಂತಹ ಬೃಹುತ್ ಡ್ಯಾಮ್ ಗಳನ್ನು ಕಟ್ಟಲು ಯೋಜಿಸಿತು.   1956 ರಿಂದ 1961ರ ಅವದಿಯ ಎರಡನೇ ಪಂಚವಾರ್ಷಿಕ ಯೋಜನೆಯಲ್ಲಿ ನೆಹರುರವರು ಕೃಷಿಯ ಜೊತೆ ಜೊತೆಗೆ ಬೃಹುತ್ ಉಧ್ಯಮಗಳನ್ನು ಕಟ್ಟುವದರಲ್ಲಿ, ಜಲವಿಧ್ಯುತ್ ಸ್ಥಾವರಗಳ ಸ್ಥಾಪನೆ, ಬಿಲಾಯ್ - ದುರ್ಗಾಪುರ- ರೂರ್ಕೆಲ ನಂತಹ ಉಕ್ಕಿನ ಕಾರ್ಖಾನೆಗಳು ಹೊಸ ರೈಲ್ವೆ ಮಾರ್ಗಗಳು, ಟಾಟ ಇನ್ಸ್ ಟ್ಯೂಟ್ ಫಂಡಮೆಂಟಲ್ ರೀಸರ್ಚ್ ಮೂಲಕ ವಿಜ್ಞಾನದ ವಿಧ್ಯಾರ್ಥಿಗಳಿಗೆ ಪ್ರೋತ್ಸಾಹದಂತಹ ಕಾರ್ಯಕ್ರಮಗಳಿ ಚಾಲನೆ ಕೊಟ್ಟರು.


ನೈಸರ್ಗಿಕ ಸಂಪನ್ಮೂಲಗಳನ್ನು ವಿವೇಚನಾಯುಕ್ತವಾಗಿ ಬಳಸುವ ಮೂಲಕ ಜನರ ಜೀವನ ಮಟ್ಟಗಳನ್ನು ಸುಧಾರಿಸುವ ಕಡೆಗೆ ಈ ಕಾರ್ಯಕ್ರಮವು ಗುರಿಯಿಟ್ಟುಕೊಂಡಿತ್ತು. ದೇಶವು ಮುಂದಕ್ಕೆ ಜಿಗಿಯಬೇಕು ಎಂಬುದಾಗಿ ನೆಹರೂ ಬಯಸಿದ್ದ ನಾನಾಬಗೆಯ ವಲಯಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ, ಕೈಗಾರಿಕಾ ವಲಯ, ಸಂವಹನೆಗಳು ಸೇರಿದ್ದವು.   ಭಾರತದ ಪ್ರಧಾನಿಯು ‘ಉಕ್ಕಿನ ಕಾರ್ಖಾನೆಗಳು ಮತ್ತು ಅಣೆಕಟ್ಟುಗಳನ್ನು’  ಆಧುನಿಕ ಭಾರತದ ‘ದೇವಾಲಯಗಳು ‘ ಎಂದು ಕರೆದರು.  


Jawaharalal Neharu

                                                                    BaakraNangal

                                                  Tata Inisitute of Fundamental  Reasearch



ಈ ಎಲ್ಲ ಸಾಧನೆಗಳ ಹಿನ್ನಲೆಯಲ್ಲಿ ನಡೆದ ಭಾರತದ ಮೂರನೆ ಮಹಾಚುನಾವಣೆಯಲ್ಲಿ ನೆಹರು ಮತ್ತೆ ತಮ್ಮ ಪಕ್ಷ ಕಾಂಗ್ರೆಸನ್ನು ಅಧಿಕಾರಕ್ಕೆ ತರುವಲ್ಲಿ ಸಫಲರಾದರು. ಮೂರು ಬಾರಿ ಸತತ ಗೆಲುವು ದಾಖಲಿಸಿದ್ದರು.  


1962 ರ ಫೆಬ್ರುವರಿ ಮಾರ್ಚಿಯಲ್ಲಿ ನಡೆದ ಚುನಾವಣೆಯಲ್ಲಿ  ಒಟ್ಟು 494 ಸದಸ್ಯಬಲದ ಲೋಕಸಬೆಗೆ  361 ಸದಸ್ಯಬಲದ ಜೊತೆಗೆ ಪ್ರಧಾನಿಯಾಗಿ ಮತ್ತೆ ಅಧಿಕಾರ ಸ್ವೀಕರಿಸಿದರು. ದೇಶದ ಜನ ಕಾಂಗ್ರೆಸ್ ಹಾಗು ನೆಹರುರವರ ಮೇಲೆ ಮತ್ತೆ ನಂಭಿಕೆ ಇಟ್ಟು ಅವರನ್ನು ಚುನಾಯಿಸಿದ್ದರು. 2-apr-1962 ರಿಂದ 3-mar-1967 ರವರೆಗಿನ ಲೋಕಸಭಾ ಅವದಿಗೆ , ಸರ್ಧಾರ್ ಹುಕುಂ ಸಿಂಗ್ ಸ್ಪೀಕರ್ ಆಗಿ ಕೃಷ್ಣಮೂರ್ತಿರಾವ್ ರವರು ಉಪ ಸ್ಪೀಕರ್ ಆಗಿ ಕಾರ್ಯ ನಿರ್ವಹಿಸಿದರು
ಈ ಅವದಿ ಭಾರತಕ್ಕೆ ಹಾಗು ನೆಹರುರವರಿಗೆ ಶುಭದಾಯಕವಾಗಿರಲಿಲ್ಲ. ವಿವರ  ನಾಲ್ಕನೆ ಹೆಜ್ಜೆಯಲ್ಲಿ


Results[edit]

Results by Party[edit]

Lok Sabha elections 1962
Electoral participation: 55.42%

%
Won
(total 494)
BJS
6.44
14
CPI
9.94
29
INC
44.72
361
PSP
6.81
12
SSP
2.69
6
SP
7.89
18
AD
0.72
3
ABHM
0.65
1
RRP
0.6
2
AIFB
0.72
2
APHLC
0.08
1
CNSPJP
0.41
3
DMK
2.01
7
GP
0.3
4
IUML
0.36
2
PWPI
0.1
0
RPI
2.83
10
HLS
0.1
1
LSS
0.24
2
NMGJP
0.17
1
RSP
0.39
2
Independents
-
11.05
20
Nominated Anglo-Indians
-
-
2



References:
election commission report -  third lokasabha election :
http://eci.nic.in/eci_main/statisticalreports/LS_1962/Vol_I_LS_62.pdf


third general election :


http://en.wikipedia.org/wiki/Indian_general_election,_1962

http://en.wikipedia.org/wiki/3rd_Lok_Sabha

1 comment:

  1. ಬಾಕ್ರನಂಗಲ್, ಹಿರಾಕುಡ್ ಮುಂತಾದ ದೊಡ್ಡ ಯೋಜನೆಗಳನ್ನು ಇಂದಿನ ಸರ್ಕಾರಗಳು ಕೈಗೆತ್ತಿಕೊಳ್ಳಲೂ ಮನಸು ಮಾಡುವುದೇ ಇಲ್ಲ.
    ಮೂರನೇ ಭಾಗವು ಮಾಹಿತಿಪೂರ್ಣವಾಗಿದೆ.

    ReplyDelete

enter your comments please