Saturday, December 29, 2012

ಸಾಯುವಾಗ ಆಕೆಯ ಕಣ್ಣಿನಲ್ಲಿ ಇರಲಿಲ್ಲ ನೀರು

ಮೇರ ಭಾರತ್ ಮಹಾನ್
============

ಸಾಯುವಾಗ ಆಕೆಯ ಕಣ್ಣಿನಲ್ಲಿ ಇರಲಿಲ್ಲ ನೀರು
ರಕ್ತವೆಲ್ಲ ಬಸಿದು ಉಳಿದಿತ್ತು ಬರಿ ಕಡೆಯ ಉಸಿರು 
ಮಾನವತ್ವಕೆ ಸದಾ ಕಪ್ಪು ಚುಕ್ಕಿ ಆಕೆಯ ಸಾವು 
ಅನಿಸದೆ ನಿಮಗಿಂದು ಮನುಜನಿಗಿಂತ ಮೃಗವೆ ಮೇಲು

ಕಪ್ಪು ಹಣದ ದೂರ್ತರ ಕೂಟಕ್ಕೆ ಬಲಿಯಾಯಿತು ದೇಶ
ಭಾರತಾಂಭೆಯ ಆತ್ಮ ಕೂಗುತಿದೆ "ಉಳಿಸು ನನ್ನ ದೇವ"
ಎಲ್ಲಡೆಯು ಅರಾಜಕತೆಯ ನಗ್ನ ನರ್ತನ,ವಿಕೃತಿಗಳ ದರ್ಶನ 
ದ್ವನಿಯೇಕೊ ಗಂಟಲಲ್ಲಿಯೆ ಉಳಿಯುತ್ತಿದೆ ಕೂಗಲು ಹೋದರೆ
" ಮೇರ ಭಾರತ್ ಮಹಾನ್"

No comments:

Post a Comment

enter your comments please