Saturday, November 23, 2013

ಕಡಗೋಲು ಸುತ್ತಿದರೆ..ಬೆಣ್ಣೆ ಬರುವುದೇ ತೇಲಿ?

ಕಡಗೋಲು ಸುತ್ತಿದರೆ..ಬೆಣ್ಣೆ ಬರುವುದೇ ತೇಲಿ?

ಬರೆಯಹೊರಟ ಬರಹಗಳೆಲ್ಲ
ಅರ್ಧಕ್ಕೆ ನಿಲ್ಲುತ್ತಿದೆ.
ಮನದಿ ಬರುವ ಚಿಂತನೆಗಳೆಲ್ಲ
ಮಧ್ಯದಲ್ಲಿ ಚದುರುತ್ತಿದೆ.
ಎಂತಹುದೋ
ಸೋಮಾರಿತನದ,
ನಿರ್ಲಕ್ಹ್ಯದ ಭಾವ
ಮನದಿ ತುಂಬಿ
ಸಾಕು ಬಿಡು ನೀನು ಬರೆದಿದ್ದು ಎಂದು ಅಣಕಿಸುತ್ತದೆ!

ಬಿಡಬೇಕು
ಬರೆಯುವದ ಬಿಡಬೇಕು!

ಹೆಪ್ಪು ಹಾಕಿದ ಹಾಲು
ಹೆಪ್ಪುಗಟ್ಟುವ ಮುನ್ನ
ಕಡಗೋಲು ಸುತ್ತಿದರೆ
ಬೆಣ್ಣೆ ಬರುವುದೇ ತೇಲಿ? !

22:45 23:11:2013

No comments:

Post a Comment

enter your comments please