Wednesday, December 4, 2013

ಮನದ ಬುದ್ಧ ಬಂಧನದಲ್ಲಿ

ಮನದ ಬುದ್ಧ ಬಂಧನದಲ್ಲಿ
==============
ಜಗದಲ್ಲಿ ಬದ್ದರೆಷ್ಟೋ ತಿಳಿಯದು
ಬುದ್ದರಂತೂ ನೂರು ನೂರು ಸಾಲು
ಕರೆಕೊಡುವ ಸಾಲು ಸಾಲು ನಾಯಕರು
ಅರ್ಥವಾದದ್ದೆಷ್ಟೋ ಜೀರ್ಣವಾದದ್ದೆಷ್ಟೋ
ಅಜೀರ್ಣವಾಗಿಯೆ ಉಳಿದ ಉಪದೇಶಗಳು!
ಅದಕ್ಕಾಗಿಯೆ
ನನ್ನ ಮನದ ಬುದ್ಧನನ್ನು
ಸಾಸಿವೆ ಡಬ್ಬದಲ್ಲಿಯೆ ಹಾಕಿ
ತಿರುಗಿಸಿರುವೆ ಮುಚ್ಚಳವನ್ನು
ಹೊರಗಿರುವ ಉಪದೇಶಗಳೆಲ್ಲ
ಜೀರ್ಣವಾಗುವ ತನಕ ಹೊರಬರದಿರುವಂತೆ
ಹೊಸ ಉಪದೇಶ ಕೊಡದಂತೆ!

1 comment:

  1. ಜಗದಲಿ ಸುಲಭ ಬಿಟ್ಪಿ ಉದೇಶ.

    ಹೆಡೆದವ್ವ ಉಪವಾಸದಲೇ ಸೊರಗಿದರೂ ಮಗರಾಯನಿಗೆ ದಾನವೀರನ ಪ್ರಶಸ್ತಿಯಂತೆ. 

    ReplyDelete

enter your comments please